
ಮಂಗಳೂರು | ವಿದ್ಯುತ್ ಆಘಾತಕ್ಕೆ ಮೂರುವರೆ ವರ್ಷದ ಮಗು ಮೃತ್ಯು: ರಕ್ಷಣೆಗೆ ಧಾವಿಸಿದ ಅಜ್ಜ ಗಂಭೀರ
ಪುತ್ತೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ನ ಅರ್ಥ್ ವಯರ್ ತಗುಲಿ ಮೂರುವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕರ್ನಾಟಕ – ಕೇರಳ ಗಡಿಭಾಗದ ಗಾಳಿಮುಖದ ಸಮೀಪದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.
ಗೋಳಿತ್ತಡಿ ನಿವಾಸಿಯಾಗಿರುವ ಶಾಫಿ ರವರ ಮೊಮ್ಮಗ (ಸಿಂಸಾರ್ ಎಂಬವರ ಮಗ) ಝೈನುದ್ದೀನ್ ( ಝೈನು )ಮೃತ ಮಗು.
ಝೈನುದ್ದೀನ್ ಮನೆಯ ಅವರಣದಲ್ಲಿ ಆಟವಾಡುತ್ತಿದ್ದಾಗ ಮನೆಯ ಗೋಡೆಯ ವಿದ್ಯುತ್ ಅರ್ಥ್ ವಯರ್ ನ ತಂತಿ ಶಾಕ್ ಹೊಡೆದಿತ್ತು. ಬೊಬ್ಬೆ ಕೇಳಿ ಮಗುವನ್ನು ರಕ್ಷಿಸಲು ಬಂದ ಮಗುವಿನ ಅಜ್ಜ ಶಾಫಿ ರವರು ವಿದ್ಯುತ್ ಶಾಕ್ ಹೊಡೆದು ಗಂಬೀರ ಸ್ಥಿತಿಯಲ್ಲಿ ಕಾಸರಗೋಡಿನ ಚೆರ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಗು ಮೃತಪಟ್ಟಿದ್ದು, ಅಜ್ಜನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.